ಸದ್ಗುರು ಅವರ ಪಾದದಡಿ ಕುಳಿತು ಆಶರ್ವಾದ ಪಡೆದ ಬಸವರಾಜ ಬಿರಾದಾರ. ದಿನಾಂಕ: 26-02-2023.
This blog regarding #Savesoil # North #Karnataka #Vijayapura #Conciousplanet #Sadhguru
ಮಂಗಳವಾರ, ಫೆಬ್ರವರಿ 28, 2023
ಸದ್ಗುರು ಅವರ ಪಾದದಡಿ ಕುಳಿತು ಆಶರ್ವಾದ ಪಡೆದ ಬಸವರಾಜ ಬಿರಾದಾರ. ದಿನಾಂಕ: 26-02-2023.
ಸದ್ಗುರು ಅವರ ಪಾದದಡಿ ಕುಳಿತು ಆಶರ್ವಾದ ಪಡೆದ ಬಸವರಾಜ ಬಿರಾದಾರ. ದಿನಾಂಕ: 26-02-2023.
ತೆರಿಗೆ ಹಣ ನಿಜವಾಗಿಯೂ ದೇವರ ಕೆಲಸಕ್ಕೆ ಉಪಯೋಗವಾಗುತ್ತಿದೆಯೇ ಎಂಬುದನ್ನು ತೆರಿಗೆದಾರರು ಯೋಚಿಸಲೇಬೇಕಾದ ಸಂದರ್ಭ ಬಂದೊದಗಿದೆ.
ಸೋಮವಾರ, ಫೆಬ್ರವರಿ 27, 2023
ಸರ್ಕಾರಿ ನೌಕರರು ಪಡೆಯುವ ಸಂಬಳ ಕಡಿತವಾಗಿ, ಈಗಿನಂತೆ ಜೀವನ ನಡೆಸಲಾಗದೆ ಪರಿತಪಿಸುವ ಕಾಲ ಬರುವುದು ಬಹಳ ದೂರ ಉಳಿದಿಲ್ಲ
ಭಾನುವಾರ, ಫೆಬ್ರವರಿ 26, 2023
... ಕೃಷಿಕರು ಪರಾವಲಂಬಿಗಳಾಗಿ ಅವರ ಸಾಲ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು?
ಶನಿವಾರ, ಫೆಬ್ರವರಿ 25, 2023
ಕೃಷಿಯಲ್ಲಿ ಭರವಸೆ ಕಳೆದುಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚಾದಂತೆ ...
ಶುಕ್ರವಾರ, ಫೆಬ್ರವರಿ 24, 2023
ಮಣ್ಣು ಉಳಿಸಲು ಕೇವಲ ಕೃಷಿಕರಿಗೆ ಭೋದನೆ ಮಾಡಿದರೆ ಸಾಲದು ...
ಮಣ್ಣು ಉಳಿಸಲು ಕೇವಲ ಕೃಷಿಕರಿಗೆ ಭೋದನೆ ಮಾಡಿದರೆ ಸಾಲದು, ಮಣ್ಣು ಉಳಿಸಲು ಮುಂದಾದ ಕೃಷಿಕರಿಗೆ ಕೃಷಿ ಲಾಭದಾಯಕವಾಗುವ ಕಾನೂನನ್ನು ಅನುಷ್ಠಾನ ಗೊಳಿಸಬೇಕು
ಈಗಾಗಲೇ ಹಲವಾರು ರೀತಿಯ ಸಂಶೋಧನೆಗಳ ಮೂಲಕ ವಿವಿಧ ಸಾವಯವ ಕೃಷಿ ಪದ್ಧತಿಗಳ ಪರಿಚಯವನ್ನು ಪುಸ್ತಕಗಳು, ಆಡಿಯೋ ಮತ್ತು ವಿಡಿಯೋ ರೂಪದಲ್ಲಿ ರೈತರ ಕೈಗೆಟಕುವ ಹಾಗೆ ವಿವಿಧ ಮಾಧ್ಯಮಗಳ ಮೂಲಕ ನೀಡಲಾಗಿದೆ. ಆದರೆ, ಅನೇಕ ಸಾವಯವ ಕೃಷಿ ತಂತ್ರಜ್ಞಾನಗಳು ಬಳಕೆಯಾಗದೆ ತುಕ್ಕು ಹಿಡಿಯುತ್ತಿವೆ. ಸಾವಯವ ಕೃಷಿ ಎಲ್ಲ ರೈತರಿಗೆ ಲಾಭದಾಯಕವಾಗದೇ ಇರುವುದೇ ಇದಕ್ಕೆ ಮೂಲ ಕಾರಣವಾಗಿದೆ.
ಅದಕ್ಕಾಗಿ ಸಾವಯವ ಕೃಷಿ ಲಾಭದಾಯಕವಾಗುವ ಕಾನೂನನ್ನು ವ್ಯವಸ್ಥಿತವಾಗಿ ಅನುಷ್ಠಾನ ಗೊಳಿಸುವುದರಿಂದ ಮಾತ್ರ ಕೃಷಿಯನ್ನು ಲಾಭದಾಯಕವಾಗಿಸಿ ನಾಶವಾಗುತ್ತಿರುವ ಮಣ್ಣನ್ನು ಪುನಶ್ಚೇತನ ಗೊಳಿಸಲು ಸಾಧ್ಯ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ರೇಡಿಯೋ ಸಂದರ್ಶನ ಆಲಿಸಿ...
https://missionsavesoil.blogspot.com/2023/02/blog-post_23.html
🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.
ಗುರುವಾರ, ಫೆಬ್ರವರಿ 23, 2023
ಮಣ್ಣು ಉಳಿಸಿ ಅಭಿಯಾನದ ಕುರಿತು ಬಸವರಾಜ ಬಿರಾದಾರ ಇವರಿಂದ ರೇಡಿಯೋ ಸಂದರ್ಶನ.
ಬುಧವಾರ, ಫೆಬ್ರವರಿ 22, 2023
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವುದಕ್ಕೆ ಯಾರು ಮೂಲ ಕಾರಣ ಮತ್ತು ಇದರ ಪರಿಣಾಮವನ್ನು ಯಾರು ಎದುರಿಸಬೇಕಾಗುವುದು?
ಮಂಗಳವಾರ, ಫೆಬ್ರವರಿ 21, 2023
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಮಾನದಂಡದ ಮೇಲೆ ಒಬ್ಬ ನಾಯಕನನ್ನು ಆಯ್ಕೆ ಮಾಡುತ್ತೇವೆ ಎಂಬುದು ನಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತದೆ.
ಭಾನುವಾರ, ಫೆಬ್ರವರಿ 19, 2023
ಪ್ರಕೃತಿಯನ್ನು ಪ್ರೀತಿಸುವುದರಲ್ಲಿ ಇರುವ ಆನಂದ ಮತ್ತಾವುದರಲ್ಲಿಯೂ ಇಲ್ಲ.
ಶನಿವಾರ, ಫೆಬ್ರವರಿ 18, 2023
ಪ್ರಕೃತಿಯಲ್ಲಿ ನಾನಿರುವೆ' ಎಂದು ಹೇಳಿದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಮಾತಿನ ಹಿಂದಿರುವ ಅರ್ಥ ಯಾವಾಗ ಎಲ್ಲರಿಗೂ ತಿಳಿಯುವುದೋ ಅಂದು ಪ್ರಕೃತಿ ಉಳಿದು ಮಾನವ ಕುಲ ಉಳಿಯಲು ಸಾಧ್ಯ
ಶುಕ್ರವಾರ, ಫೆಬ್ರವರಿ 17, 2023
ಪ್ರಕೃತಿಯ ನಾಶದಿಂದ ಅನೇಕ ಜೀವರಾಶಿಗಳು ನಾಶವಾಗುತ್ತಿರುವ ಸಂದರ್ಭದಲ್ಲಿ ನಡೆದಾಡುವ ದೇವರು ಎಂತಹ ರಾಜಕೀಯ ನಾಯಕರನ್ನು ಮೆಚ್ಚಬಹುದು?
ಗುರುವಾರ, ಫೆಬ್ರವರಿ 16, 2023
ಹಿಂದೆ ಅನೇಕ ನಡೆದಾಡುವ ದೇವರುಗಳು ಮಹಾನ್ ರಾಜಕೀಯ ನಾಯಕರನ್ನು ತಯಾರಿ ಮಾಡಿ, ಅವರಿಂದ ತಮ್ಮ ಸತ್ಯ ಸಂಕಲ್ಪ ನೆರವೇರುವಂತೆ ಮಾಡಿದ್ದಾರೆ. ಹಾಗಾದರೆ ಇಂದು...?
ಬುಧವಾರ, ಫೆಬ್ರವರಿ 15, 2023
ನಡೆದಾಡುವ ದೇವರು ಪ್ರಕೃತಿ ಉಳಿಸಲು ಮತ್ತೆ ನಮ್ಮ ಮೂಲಕ ನಡೆದಾಡಲು ಇಚ್ಚಿಸದರೆ, ನಾವು ಅದಕ್ಕೆ ಅವಕಾಶ ನೀಡಬಹುದೆ?
ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಯವರು ತಮ್ಮ ಜೀವನಪರ್ಯಂತ ಪ್ರಕೃತಿ ಮಾತೆಯನ್ನು ಅರಿಯಲು ಪ್ರಯತ್ನಿಸಿ ಕೇವಲ ಪ್ರಕೃತಿಯ ಕುರಿತು ಜ್ಞಾನವನ್ನು ಹಂಚುವ ಕಾರ್ಯಕದಲ್ಲಿ ತೊಡಗಿದ್ದರು. ಅವರು ಹಂಚಿದ ಜ್ಞಾನ ವ್ಯರ್ಥವಾಗದೇ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬಂದು ಪ್ರಕೃತಿ ಉಳಿಯುವಂತಾಗಲು ಅವರು ನಮ್ಮ ಮೂಲಕ ನಡೆದಾಡಲು ಇಚ್ಚಿಸಿದರೆ, ನಾವು ಅದಕ್ಕೆ ಅವಕಾಶ ನೀಡಬಹುದೆ?
ಮುಂದಿನ 20-30 ವರ್ಷಗಳಲ್ಲಿ ಪ್ರಕೃತಿ ನಾಶವಾಗಿ ಸುಮಾರು 200 ಕೋಟಿ ಜನ ಸಾವಿಗೀಡಾಗುವ ಸಂದರ್ಭವಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಅಂದರೆ, ಇದು ಒಟ್ಡಾರೆ ಮಾನವ ಜನಾಂಗ ಎದುರಿಸಬೇಕಾದ ದೊಡ್ಡದಾದ ಸಮಸ್ಯೆ. ಹಾಗಿದ್ದರೆ, ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲೇಬೇಕಾದ ಸಂದರ್ಭ ಬಂದೊದಗಿದೆ. "ಕಳೆದ 10 ಸಾವಿರ ವರ್ಷಗಳಿಂದ ಈ ಭೂಮಿಯ ಮೇಲೆ ದೊಡ್ಡದಾದ ಸಮಸ್ಯೆ ತಲೆ ದೋರಿದಾಗ ಆ ಸಮಸ್ಯೆಗೆ ಪರಿಹಾರ ನೀಡಿದ ದೇಶ ಯಾವುದಾದರೂ ಇದ್ದರೆ, ಅದು ಭಾರತ ದೇಶ " ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಖಂಡಿತ, ಅದೇ ಆಧ್ಯಾತ್ಮಿಕ ಶಕ್ತಿಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡು ಇತರ ದೇಶಗಳಿಗೆ ಮಾದರಿಯಾಗಿ ಹಲವು ಬಾರಿ ಭಾರತ ದೇಶ 'ವಿಶ್ವ ಗುರು 'ವಾಗಿ ನಿಂತಿದೆ. ಹಾಗಾದರೆ, ಮತ್ತೊಮ್ಮೆ ಭಾರತ ದೇಶ ಈ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡುಕೊಂಡು ಇತರ ದೇಶಗಳಿಗೆ ಮಾದರಿಯಾಗಿ ನಿಂತು 'ವಿಶ್ವ ಗುರು' ಆಗಬಹುದೆ?
ವಿಶ್ವ ಗುರು ಭಾರತವಾಗಬೇಕಾದರೆ, ಅದು ತಾನೇ ಆಗುವುದಿಲ್ಲ ನಾವು ಮಾಡಬೇಕಾಗುತ್ತದೆ. ಅಂದರೆ, ನಡೆದಾಡುವ ದೇವರುಗಳು ನಡೆದ ದಾರಿಯಲ್ಲಿ ಸ್ವಲ್ಪವಾದರೂ ನಡೆಯುವ ಜನ ಬೇಕಾಗುತ್ತದೆ. ಅಂತಹ ಜನರನ್ನು ಯಾವುದೋ ರೂಪದಲ್ಲಿ ಆಯಾ ಕಾಲಘಟ್ಟದಲ್ಲಿ ಆಗಿ ಹೋದ ಆಧ್ಯಾತ್ಮಿಕ ಪುರುಷರು ತಯಾರಿ ಮಾಡುತ್ತಾರೆ. ಆ ಜನರ ಮೂಲಕವೇ ಸಮಸ್ಯೆಗೆ ಪರಿಹಾರ ದೊರೆಯುವಂತೆ ಆಗುತ್ತದೆ.
ಈ ನಿಟ್ಟಿನಲ್ಲಿ ನಮ್ಮ ಕಾಲಘಟ್ಟದಲ್ಲಿ ಆಗಿ ಹೋದ ಮಹಾನ್ ಆಧ್ಯಾತ್ಮಿಕ ಗುರುಗಳೇ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಯಾವುದೋ ರೂಪದಲ್ಲಿ ಅವರ ಪ್ರಭಾವಕ್ಕೆ ಒಳಗಾದವರ ಮೂಲಕ ಪ್ರಕೃತಿ ಉಳಿಸುವ ಕಾರ್ಯ ಅಗುವಂತೆ ಮಾಡಲು ಅವರು ಇಂದು ಹಂಬಲಿಸುತ್ತಿದ್ದಾರೆ.
ಭಾರತ ದೇಶ ಹಿಂದಿನಿಂದಲೂ ಗುರು ಶಿಷ್ಯ ಪರೆಂಪರೆಯಿಂದಲೇ ಉಳಿದು ಬೆಳೆದಿದೆ. ಅಂದರೆ, ಒಬ್ಬ ಮಹಾನ್ ಆಧ್ಯಾತ್ಮಿಕ ಗುರು ಅವತರಿಸಿದರೆ, ಲಕ್ಷಾಂತರ ಜನ ಅವರ ಶಿಷ್ಯರು ಗುರುವಿನ ಗುರಿಯನ್ನೇ ತಮ್ಮ ಗುರಿಯನ್ನಾಗಿಸಿಕೊಂಡು ನಡೆದು ಮುಕ್ತಿಗೆ ಹತ್ತಿರವಾಗಿದ್ದಾರೆ. ಹಾಗಾದರೆ, ಶ್ರೀಗಳ ಪ್ರಕೃತಿ ಉಳಿಸುವ ಗುರಿ ಅವರ ಶಿಷ್ಯರ ಗುರಿ ಆಗಬಹುದೆ? ಖಂಡಿತ, ಇಂದು ಈ ಗುರಿಯೊಂದಿಗೆ ನಡೆಯುವ ಕೋಟ್ಯಾಂತರ ಜನರ ಅವಶ್ಯಕತೆಯಿದೆ.
ಉರಿವ ದೀಪದ ಹತ್ರಿರ ಬಂದ ಕೀಟ ಅದರ ಸುತ್ತ ಸುತ್ತುತ್ತಲೇ ಬೆಂಕಿಗೆ ಆಹುತಿಯಾಗಿ ತಾನೂ ಅದರಲ್ಲಿ ಒಂದಾಗಿ ದೀಪ ಹೆಚ್ಚು ಬೆಳಗುವಂತೆ ಮಾಡುವುದು. ಇದೇ ರೀತಿ ನಡೆದಾಡುವ ದೇವರ ಗುರಿಯೊಂದಿಗೆ ನೆಡೆಯಲು ಪ್ರಾರಂಭಿಸಿದರೆ ಒಂದು ದಿನ ಅವರ ಒಂದು ಅಂಶವೇ ನಾವಾಗಿ ನಡೆಯಲು ಪ್ರಾರಂಭಿಸುತ್ತೇವೆ. ನಮ್ಮ ಕಾಲಘಟ್ಟದಲ್ಲಿ ಆಗಿಹೋದ ಮಹಾನ್ ಚೇತನದ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುವುದೇ ಭಕ್ತಿ.
ಭಕ್ತಿ ಎಂದರೆ ದಿಕ್ಸೂಚಿ ಇಲ್ಲದ ಹಡಗಿನಲ್ಲಿ ಕೇವಲ ಹಡಗು ಚಲಿಸುವಾತನನ್ನು ನಂಬಿ ನಡೆದಂತೆ. ಇದು ಹಡಗು ಚಲಿಸುವಾತನ ಮೇಲಿನ ನಂಬಿಕೆಯನ್ನು ಅವಲಂಬಿಸಿದೆ. ಹಾಗಿದ್ದರೆ, ನಾವು ನಡೆದಾಡುವ ದೇವರನ್ನು ನಂಬಿ ಅವರ ಗುರಿಯನ್ನೇ ನಮ್ಮ ಗುರಿಯನ್ನಾಗಿಸಿಕೊಂಡು ಪ್ರಕೃತಿ ಮಾತೆಯನ್ನು ಉಳಿಸುವ ಕಾರ್ಯದಲ್ಲಿ ತೊಡಗಿದರೆ, ಅದುವೇ ನಂಬಿದ ಗುರುವಿನ ಭಕ್ರರಾಗುವ ಮಾರ್ಗ.
ಪ್ರಕೃತಿ ಮಾತೆಯನ್ನು ಉಳಿಸುವ ಕಾರ್ಯದಲ್ಲಿ ತೊಡಗುವುದೆಂದರೆ ನಮಗೆ ಸಾಧ್ಯವಾದಷ್ಟು ನಮ್ಮ ತನು ಮನ ಧನವನ್ನು ಪ್ರಕೃತಿಯನ್ನು ಉಳಿಸುವ ಕಾರ್ಯಕ್ಕೆ ತೊಡಗಿಸುವುದು ಎಂದು ಎರ್ಥ. ಈ ಸಂದರ್ಭದಲ್ಲಿ ಯಾರು ತಮ್ಮನ್ನು ತಾವು ಸಂಪೂರ್ಣವಾಗಿ ಪ್ರಕೃತಿ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೋ ಅವರಿಗೆ ಯಾವುದೇ ರೂಪದಲ್ಲಿ ಕೈ ಜೋಡಿಸಿದರೂ ಅದು ನಂಬಿದ ಗುರುವಿನ ಹಾದಿಯಲ್ಲಿ ನಡೆಯುವುದಾಗಿದೆ.
ಪೂಜ್ಯ ಶ್ರೀಗಳ ಕೃಪೆಯಿಂದ ಬರೆಯುತ್ತಿರುವ ಈ ಲೇಖನಗಳು ತಮ್ಮ ಮೇಲೆ ಯಾವುದೋ ರೂಪದಲ್ಲಿ ಪ್ರಭಾವ ಬೀರುತ್ತಿದ್ದರೆ, ಪ್ರಕೃತಿ ಮಾತೆಯನ್ನು ಉಳಿಸಿ ಮಾನವ ಕುಲವನ್ನು ಉಳಿಸುವ ಮಹಾನ್ ಕಾರ್ಯದಲ್ಲಿ ಹೇಗೆ ಕೈ ಜೋಡಿಸಬಹುದೆಂದು ತಾವೂ ಕೂಡ ಯೋಚಿಸಬಹುದು.
ಯಾವುದೋ ರೂಪದಲ್ಲಿ ಪ್ರಕೃತಿ ಮಾತೆಯನ್ನು ಉಳಿಸುವ ಕಾರ್ಯದಲ್ಲಿ ತೊಡಗಲು ಜನರನ್ನು ಒಗ್ಗೂಡಿಸಲು ಪ್ರಯತ್ನಿಸಬೇಕಿದೆ. ಭೂಮಿಯ ಮೇಲೆ ಆಯಾ ಸಂದರ್ಭದಲ್ಲಿ ಯಾವ ಕೆಲಸದ ಅವಶ್ಯಕತೆಯಿತ್ತೋ ಅದನ್ನು ಅರಿತು ಆ ಅವಶ್ಯಕತೆಯನ್ನು ಪೂರೈಸುವ ಕಾರ್ಯದಲ್ಲಿ ತೊಡಗುವುದೇ ಆಧ್ಯಾತ್ಮ. ಇಂದು ಭೂಮಿಯ ಮೇಲೆ ಅತ್ಯಂತ ಅವಶ್ಯವಿರುವ ಕೆಲಸವೇ ಪ್ರಕೃತಿ ಮಾತೆಯನ್ನು ಉಳಿಸಿ ಬೆಳೆಸುವ ಕೆಲಸ. ಹಾಗಿದ್ದರೆ, ಈ ಮಹಾನ್ ಕೆಲಸದಲ್ಲಿ ಕೈ ಜೋಡಿಸಿ ನಾವು ಆಧ್ಯಾತ್ಮಿಕ ಜೀವಿಗಳಾಗಬಹುದೆ?
ಭಾರತ ದೇಶ ವಿಶ್ವ ಗುರುವಾಗಬೇಕು ಎಂದು ಕೇವಲ ಬಯಸಿದರೆ ಮಾತ್ರ ಅದು ಆಗುವುದಿಲ್ಲ,ಅದನ್ನು ನಾವು ಒಗ್ಗೂಡಿ ಮಾಡಬೇಕಾಗುತ್ತದೆ. ನಾವು ನಮ್ಮ ಕಾಲಘಟ್ಟದಲ್ಲಿ ಆಗಿ ಹೋದ ನಡೆದಾಡುವ ದೇವರ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡಿದರೆ ಮಾತ್ರ ಭಾರತ ದೇಶ ವಿಶ್ವ ಗುರುವಾಗಲು ಸಾಧ್ಯ.
ಯೋಚಿಸಿ! ನಿಮ್ಮ ಅಭಿಪ್ರಾಯವನ್ನು ತಿಳಿಸಿ.
🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.
ಮಂಗಳವಾರ, ಫೆಬ್ರವರಿ 14, 2023
ನಡೆದಾಡುವ ದೇವರ ನಡೆದಾಟ ಕೊನೆಯಾಯಿತೆ? ಅಥವಾ ಅವರ ಪ್ರಕೃತಿ ಉಳಿಸುವ ಸತ್ಯ ಸಂಕಲ್ಪ ಇಡೇರಲು ಇನ್ನೂ ನಡೆದಾಡುತ್ತಿದ್ದಾರೆಯೇ?
-
ಭಾಷಣದ ವಿಡಿಯೋ ಅಪ್ಲೋಡ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ: https://forms.gle/ksFzH1wMuVEX4jDJ6 ಸಿದ್ದಪಡಿಸಿದ ಮಾದರಿ ಭಾಷಣಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ : http...
-
ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ "ಮಣ್ಣು ಪುನಶ್ಚೇತನ ಕಾನೂನು" ವ್ಯವಸ್ಥಿತವಾಗಿ ಅನುಷ್ಠಾನವಾದರೆ ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಸಿ...
-
ಮಣ್ಣು ಉಳಿಸಿ ಅಭಿಯಾನದ ಕುರಿತು ಬಸವರಾಜ ಬಿರಾದಾರ ಇವರಿಂದ ರೇಡಿಯೋ ಸಂದರ್ಶನ. ಇವರು ಉತ್ತರ ಕರ್ನಾಟಕದಾದ್ಯಂತ ಏಕಾಂಗಿಯಾಗಿ ಬೈಕ್ ಮೇಲೆ ಪ್ರಯಾಣಿಸಿ ಮಣ್ಣು ಉಳಿಸಿ ಅಭಿಯ...