https://docs.google.com/forms/d/1MRyAdJs_kJigZxoRCNCz274pANFPKaHlfQ4Ugv0md6A/edit
https://missionsavesoil.blogspot.com/2023/05/blog-post.html
This blog regarding #Savesoil # North #Karnataka #Vijayapura #Conciousplanet #Sadhguru
https://docs.google.com/forms/d/1MRyAdJs_kJigZxoRCNCz274pANFPKaHlfQ4Ugv0md6A/edit
https://missionsavesoil.blogspot.com/2023/05/blog-post.html
ಮಣ್ಣು, ರೈತರು ಮತ್ತು ಆಹಾರ ಸೇವಿಸುವವರ ರಕ್ಷಣೆಗಾಗಿ 'ಮಣ್ಣು ಉಳಿಸಿ' ಅಭಿಯಾನದ ಸ್ವಯಂ ಸೇವಕರಿಂದ ಸ್ವ-ಇಚ್ಚೆಯಿಂದ ರಾಜ್ಯಾದ್ಯಂತ ವಿವಿಧ ರೀತಿಯ ಜನಜಾಗೃತಿ ಕಾರ್ಯಕ್ರಮಗಳನ್ನು ಆಯಾ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳ ಮಾಹಿತಿಯನ್ನು ಜಿಲ್ಲಾವಾರು ಗ್ರೂಪ್ ಗಳಲ್ಲಿ ಹಂಚಿಕೊಳ್ಳಲಾಗುವುದು. ತಾವೂ ಕೂಡ ಸ್ವಯಂ ಸೇವಕರಾಗಿ ನಾವು ಕಳುಹಿಸುವ ಮಾಹಿತಿಯನ್ನು ತಮ್ಮ ಜಿಲ್ಲೆಯ ಇತರರಿಗೆ ಹಂಚಿಕೊಳ್ಳಬಹುದು.
ಮಣ್ಣು ಮತ್ತು ಮಣ್ಣನ್ನು ಅವಲಂಬಿಸಿದ ರೈತರು ಉಳಿದರೆ ಮಾತ್ರ ನಮಗೆ ಮುಂದೆ ಒಳ್ಳೆಯ ಭವಿಷ್ಯವಿದೆ ಎಂಬ ಅರಿವು ಉಳ್ಳವರು ಹಾಗೂ ಇಂದು ನಮಗೆ ಉತ್ತಮ ಗುಣಮಟ್ಟದ(ಅರೋಗ್ಯಯುತ) ಆಹಾರ ದೊರೆತರೆ ಮಾತ್ರ ನಾವು ಆರೋಗ್ಯದಿಂದರಲು ಸಾಧ್ಯ ಎಂಬುದರ ಕುರಿತು ಮನವರಿಕೆಯಾದವರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು.
ನಿಮ್ಮ ಜಿಲ್ಲೆಯ ಮುಂದಿನ ವಾಟ್ಸಪ್ ಗ್ರೂಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ 'ಮಣ್ಣು ಉಳಿಸಿ' ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.
ಇಂದು ಕೇವಲ 2 ಪ್ರತಿಶತ ರೈತರ ಮಕ್ಕಳೂ ಕೂಡ ರೈತರಾಗಲು ಮುಂದೆ ಬರುತ್ತಿಲ್ಲ.
ದೇಶಕ್ಕೆ ಪ್ರಧಾನ ಮಂತ್ರಿ ಇಲ್ಲದಿದ್ದರೆ ನಡೆಯುತ್ತದೆ.
ರಾಜ್ಯಕ್ಕೆ ಮುಖ್ಯಮಂತ್ರಿ ಇಲ್ಲದಿದ್ದರೆ ನಡೆಯುತ್ತದೆ.
ಜಿಲ್ಲೆಗೆ ಸಂಸದರು ಇಲ್ಲದಿದ್ದರೆ ನಡೆಯುತ್ತದೆ.
ವಿಧಾನಸಭಾ ಕ್ಷೇತ್ರಕ್ಕೆ ಶಾಸಕರು ಇಲ್ಲದಿದ್ದರೆ ನಡೆಯುತ್ತದೆ.
ಆದರೆ, ರೈತ ಇಲ್ಲದಿದ್ದರೆ ಏನೂ ನಡೆಯುವುದಿಲ್ಲ, ಮಾನವ ಕುಲವೇ ಬದುಕುಳಿಯಲು ಸಾಧ್ಯವಿಲ್ಲ. ಆದರೆ, ಇಂದು ನಾವು ರೈತ ಜಾತಿಯನ್ನು ಕಡೆಗಣಿಸಿ ಅರ್ಥವಿಲ್ಲದ ಜಾತಿಗಳ ಬೆನ್ನು ಹತ್ತಿರುವುದರ ಪರಿಣಾಮವನ್ನು ಎಲ್ಲರೂ ಮುಂದೊಂದು ದಿನ ಎದುರಿಸಲೇಬೇಕಾಗುವುದು.
ರೈತರ ಮತ್ತು ರೈತರನ್ನು ಅವಲಂಬಿಸಿದ ಜನರ ರಕ್ಷಣೆಗಾಗಿ ಪ್ರಾರಂಭಿಸಿದ ನಡೆ ನಮನ ಅಭಿಯಾನದಲ್ಲಿ ಪಾಲ್ಗೊಳ್ಳಲು ನಿಮ್ಮಲ್ಲಿ ವಿನಂತಿ.
ಮಣ್ಣು, ರೈತರು ಮತ್ತು ಆಹಾರ ಸೇವುಸುವವರ ರಕ್ಷಣೆಗಾಗಿ "ಮಣ್ಣು ಪುನಶ್ಚೇತನ ಕಾನೂನು" ಜಾರಿಗಾಗಿ ವಿಧಾನಸಭೆಯಲ್ಲಿ ಕರ್ನಾಟಕದ ಜನರನ್ನು ಪ್ರತಿನಿಧಿಸಲು ಸ್ಪರ್ಧಿಸಿ ವಿಜೇತರಾದ ಮತ್ತು ಪರಾಭವಗೊಂಡ ಎಲ್ಲ ಅಭ್ಯರ್ಥಿಗಳಿಗೆ ಪಕ್ಷಾತೀತವಾಗಿ ಮನವಿ ಪತ್ರ ಸಲ್ಲಿಸಲು ಇಚ್ಚಿಸುವವರು ಇಲ್ಲಿ ನೋಂದಾಯಿಸಿಕೊಳ್ಳಿ
https://docs.google.com/forms/d/1MRyAdJs_kJigZxoRCNCz274pANFPKaHlfQ4Ugv0md6A/edit
ನಾನು ರೈತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡುವ ಯೋಜನೆ ಜಾರಿಗಾಗಿ ಪತ್ರ ಚಳುವಳಿ
https://missionsavesoil.blogspot.com/2023/05/after-election.html
ಭಾಷಣದ ವಿಷಯ: ಪರಿಸರ ಉಳಿಸುವಲ್ಲಿ ನಮ್ಮನ್ನಾಳುವ ನಾಯಕರ ಜವಾಬ್ದಾರಿ ( ಮುಂದಿನ 20-30 ವರ್ಷಗಳಲ್ಲಿ ಮಣ್ಣು ನಾಶವಾಗಿ 200 ಕೋಟಿ ಜನಸಂಖ್ಯೆ ಸಾವಿಗೀಡಾಗುವ ಸಂದರ್ಭ ಬರುವುದೆಂದು ವಿಶ್ವ ಸಂಸ್ಥೆ ಹೇಳಿದೆ. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರಕ್ಕೆ ಮತ್ತು ಉಳಿದ ಎಲ್ಲ ಕ್ಷೇತ್ರಗಳಿಗೂ ನ್ಯಾಯ ಒದಗಿಸುವ ಸೂಕ್ತ ಪ್ರಜ್ಞಾವಂತ ನಾಯಕರಿಗಿರಬೇಕಾದ ಗುಣಲಕ್ಷಣಗಳ ಕುರಿತ ಭಾಷಣ ಸ್ಪರ್ಧೆ ಇದಾಗಿದೆ)
1. ಮೊದಲ ಬಹುಮಾನ ರೂ. 1 ಲಕ್ಷ.
2. ಎರಡನೇ ಬಹುಮಾನ ರೂ. 50 ಸಾವಿರ
3. ಮೂರನೇ ಬಹುಮಾನ ರೂ. 25 ಸಾವಿರ
4. ಸಮಾಧಾನಕರ ಬಹುಮಾನ ರೂ. 5 ಸಾವಿರದಂತೆ 10 ವಿದ್ಯಾರ್ಥಿಗಳಿಗೆ ನೀಡಲಾಗುವುದು.
ಕೃಷಿ ಮಹಾವಿದ್ಯಾಲಯ, ವಿಜಯಪುರದ ಪ್ರಜ್ಞಾವಂತ ಕೃಷಿ ಪದವೀಧರರು ಬಹುಮಾನ ನೀಡುತ್ತಿದ್ದಾರೆ.
(ಇತರರು ವೈಯಕ್ತಿಕವಾಗಿ ಅಥವಾ ಸಂಘ-ಸಂಸ್ಥೆಗಳ ಮೂಲಕ ಬಹುಮಾನ ನೀಡಲು ಮುಂದೆ ಬಂದರೆ ಆಯಾ ಬಹುಮಾನಗಳ ಸಂಖ್ಯೆ ಹೆಚ್ಚಾಗುವವು)
2 ರಿಂದ 10 ನಿಮಿಷ (ನಾವು ನೀಡಿದ ಅವಧಿಯಲ್ಲಿ ಇರುವ ಭಾಷಣಗಳನ್ನು ಮಾತ್ರ ಸ್ವೀಕರಿಸಲಾಗುವುದು)
ಯುಟುಬ್ ವೀಕ್ಷಕರ ಸಂಖ್ಯೆ, ಸರಾಸರಿ ವೀಕ್ಣಣೆಯ ಸಮಯ, ಲೈಕ್ ಗಳು ಮತ್ತು ಕಮೆಂಟ್ ಗಳ ಆಧಾರದ ಮೇಲೆ ಹಾಗೂ ಇನ್ನೂ ಕೆಲವು ಮಾನದಂಡಗಳ ಆಧಾರದ ಮೇಲೆ ಬಹುಮಾನ ನೀಡಲಾಗುವುದು.
ತಾವು ವಿಡಿಯೋ ಕಳುಹಿಸಿದ ಮೂರು ದಿನಗಳಲ್ಲಿ ಯುಟುಬ್ ಗೆ ಅಪ್ಲೋಡ್ ಮಾಡಲಾಗುವುದು.
ದಿನಾಂಕ 15-07-2023 ರ ವರೆಗೆ ವೀಕ್ಷಿಸಿದ ವೀಕ್ಷಕರ ಆಧಾರದ ಮೇಲೆ ಬಹುಮಾನವನ್ನು ಘೋಷಿಸಲಾಗುವುದು(ಅಂದಿನ ದಿನ ಸಾಯಂಕಾಲ 6 ಗಂಟೆಗೆ).
18 ವರ್ಷ ಮೀರಿರಬಾರದು (ದಿನಾಂಕ: 18-02-2023 ಕ್ಕೆ 18 ವರ್ಷ ಆಗಿರಬಾರದು)
ಬದಲಾವಣೆ: ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವ ಮತ್ತು ಬಹುಮಾನ ಘೋಷಣಾ ದಿನಾಂಕವನ್ನು ಹಲವು ಶಿಕ್ಷಕರ ಕೋರಿಕೆ ಮೇರೆಗೆ ಬದಲಾವಣೆ ಮಾಡಲಾಗಿದೆ. ಭಾಷಣ ಸ್ಪರ್ಧೆಯಲ್ಲಿ ಭಾಗವಗಿಸುವ ಕೊನೆಯ ದಿನಾಂಕ : 15-05-2023 ರ ಬದಲು 01-07-2023 ಎಂದಾಗಿದೆ ಹಾಗೂ ಭಾಷಣ ಸ್ಪರ್ಧೆಯ ಬಹುಮಾನ ಘೋಷಣಾ ದಿನಾಂಕ: 15-06-23 ರ ಬದಲು 15-07-2023 ಎಂದಾಗಿದೆ. ಈ ಬದಲಾವಣೆಗೆ ಮುಖ್ಯ ಕಾರಣ ಶಾಲಾ ಪರೀಕ್ಷೆಗಳು ಮತ್ತು ರಜಾ ದಿನಗಳು ಸ್ಪರ್ಧಾ ಸಮಯದಲ್ಲಿ ಇದ್ದ ಕಾರಣ ಸಿಕ್ಷಕರು ಮಕ್ಕಳನ್ನು ಭಾಷಣ ಸ್ಪರ್ಧೆಯಲ್ಲಿ ತೊಡಗಿಸಲು ಸಾಧ್ಯವಾಗಿಲ್ಲ. ಹಾಗಾಗಿ ಶಾಲಾ ಶಿಕ್ಷಕರ ಕೋರಿಕೆಯ ಮೇರೆಗೆ ಈ ಬದಲಾವಣೆ ಮಾಡಲಾಗಿದೆ.
1. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಕೃಪೆಯಿಂದ ಬರೆದ "ಉಸಿರು" ಕಿರು ಪುಸ್ತಕವು ಆನ್ಲೈನ್ ನಲ್ಲಿ ಲಭ್ವವಿದೆ, ಅದನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಓದಿರಿ. ಮಣ್ಣು ಉಳಿಸಿ ಅಭಿಯಾನದ ಕುರಿತ ರೇಡಿಯೋ ಸಂದರ್ಶನದ ಆಡಿಯೋ ಯುಟುಬ್ ನಲ್ಲಿ ಲಭ್ಯವಿದೆ, ಅದನ್ನೂ ಕೂಡ ಕೇಳಿದ ನಂತರ ಭಾಷಣ ತಯಾರಿ ಮಾಡುವುದು.
2. ನಡೆದಾಡುವ ದೇವರಾದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನದ ಮಾತುಗಳು, ಗತಿಸಿಹೋದ ಹಲವು ಮಹಾನ್ ನಾಯಕರ ಮಾತುಗಳು ಹಾಗೂ ಕೆಲವು ಘಟನೆಗಳನ್ನು ಉಲ್ಲೇಖಿಸಿ ಭಾಷಣ ಮಾಡಬೇಕು.
3.ಮಣ್ಣು ಉಳಿಸಿ ಅಭಿಯಾನದ ವೆಬ್ಸೈಟ್ savesoil.org ನಲ್ಲಿಯ ಮಾಹಿತಿಯನ್ನು ಭಾಷಣದಲ್ಲಿ ಉಪಯಲಯೋಗಿಸಿ. ವಾಸ್ತವಿಕವಾಗಿ ರೈತರ ಹಾಗೂ ಇತರ ಸಾಮಾಜಿಕ ಸಮಸ್ಯೆಗಳ ಉಲ್ಲೇಖಿತ ಭಾಷಣ ಇರಬೇಕು.
4. ಭಾಷಣದಲ್ಲಿ ಯಾವುದೇ ವ್ಯಕ್ತಿಯ ತೇಜೊವಧೆ ಮಾಡಿರಬಾರದು ಹಾಗೂ ಯಾವುದೇ ರಾಜಕೀಯ ವ್ಯಕ್ತಿಯ ಹೆಸರು ಅಥವಾ ಪಕ್ಷದ ಹೆಸರನ್ನು ಬಳಕೆ ಮಾಡಬಾರದು. ಅಂತಹ ಭಾಷಣಗಳನ್ನು ಸ್ವೀಕರಿಸುವುದಿಲ್ಲ.
5. ಮುಂಬರುವ ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ ಹೇಗಿರಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಭಾಷಣ ಇರಬೇಕು.
6. ಭಾಷಣದಲ್ಲಿ ತಾವು ಭಾಗವಹಿಸುವುದು ಬಹಳ ಮುಖ್ಯ, ಆದ ಕಾರಣ ಭಾಷಣವನ್ನು ಜನರಿಗೆ ಮನಮುಟ್ಟುವಂತೆ ಓದಲೂ ಬಹುದು. ವಾಸ್ತವಿಕ ಸಮಸ್ಯೆಗಳನ್ನು ಹೆಚ್ಚು ಜನರಿಗೆ ಮನಮುಟ್ಟುವಂತೆ ತಿಳಿಸುವಿರಿ ಎಂಬುದಕ್ಕೆ ಆದ್ಯತೆ ಇರುವುದು.
ಅತೀ ಹೆಚ್ಚು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಲು ಪ್ರಜ್ಞಾವಂತ ಶಿಕ್ಷಕರು ಮತ್ತು ಪಾಲಕರಲ್ಲಿ ಕಳಕಳಿಯ ವಿನಂತಿ.
ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇದೊಂದು ವಿಶೇಷ ಅವಕಾಶ.
ಇಂದೇ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿರಿ.
ಅಭೀಃ ಫೌಂಡೇಶನ್, ವಿಜಯಪುರ
https://docs.google.com/forms/d/1MRyAdJs_kJigZxoRCNCz274pANFPKaHlfQ4Ugv0md6A/edit
https://missionsavesoil.blogspot.com/2023/05/blog-post.html
ಭಾಷಣದ ವಿಷಯ: ಪರಿಸರ ಉಳಿಸುವಲ್ಲಿ ನಮ್ಮನ್ನಾಳುವ ನಾಯಕರ ಜವಾಬ್ದಾರಿ ( ಮುಂದಿನ 20-30 ವರ್ಷಗಳಲ್ಲಿ ಮಣ್ಣು ನಾಶವಾಗಿ 200 ಕೋಟಿ ಜನಸಂಖ್ಯೆ ಸಾವಿಗೀಡಾಗುವ ಸಂದರ್ಭ ಬರುವುದೆಂದು ವಿಶ್ವ ಸಂಸ್ಥೆ ಹೇಳಿದೆ. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರಕ್ಕೆ ಮತ್ತು ಉಳಿದ ಎಲ್ಲ ಕ್ಷೇತ್ರಗಳಿಗೂ ನ್ಯಾಯ ಒದಗಿಸುವ ಸೂಕ್ತ ಪ್ರಜ್ಞಾವಂತ ನಾಯಕರಿಗಿರಬೇಕಾದ ಗುಣಲಕ್ಷಣಗಳ ಕುರಿತ ಭಾಷಣ ಸ್ಪರ್ಧೆ ಇದಾಗಿದೆ)
1. ಮೊದಲ ಬಹುಮಾನ ರೂ. 1 ಲಕ್ಷ.
2. ಎರಡನೇ ಬಹುಮಾನ ರೂ. 50 ಸಾವಿರ
3. ಮೂರನೇ ಬಹುಮಾನ ರೂ. 25 ಸಾವಿರ
4. ಸಮಾಧಾನಕರ ಬಹುಮಾನ ರೂ. 5 ಸಾವಿರದಂತೆ 10 ವಿದ್ಯಾರ್ಥಿಗಳಿಗೆ ನೀಡಲಾಗುವುದು.
ಕೃಷಿ ಮಹಾವಿದ್ಯಾಲಯ, ವಿಜಯಪುರದ ಪ್ರಜ್ಞಾವಂತ ಕೃಷಿ ಪದವೀಧರರು ಬಹುಮಾನ ನೀಡುತ್ತಿದ್ದಾರೆ.
(ಇತರರು ವೈಯಕ್ತಿಕವಾಗಿ ಅಥವಾ ಸಂಘ-ಸಂಸ್ಥೆಗಳ ಮೂಲಕ ಬಹುಮಾನ ನೀಡಲು ಮುಂದೆ ಬಂದರೆ ಆಯಾ ಬಹುಮಾನಗಳ ಸಂಖ್ಯೆ ಹೆಚ್ಚಾಗುವವು)
2 ರಿಂದ 10 ನಿಮಿಷ (ನಾವು ನೀಡಿದ ಅವಧಿಯಲ್ಲಿ ಇರುವ ಭಾಷಣಗಳನ್ನು ಮಾತ್ರ ಸ್ವೀಕರಿಸಲಾಗುವುದು)
ಯುಟುಬ್ ವೀಕ್ಷಕರ ಸಂಖ್ಯೆ, ಸರಾಸರಿ ವೀಕ್ಣಣೆಯ ಸಮಯ, ಲೈಕ್ ಗಳು ಮತ್ತು ಕಮೆಂಟ್ ಗಳ ಆಧಾರದ ಮೇಲೆ ಹಾಗೂ ಇನ್ನೂ ಕೆಲವು ಮಾನದಂಡಗಳ ಆಧಾರದ ಮೇಲೆ ಬಹುಮಾನ ನೀಡಲಾಗುವುದು.
ತಾವು ವಿಡಿಯೋ ಕಳುಹಿಸಿದ ಮೂರು ದಿನಗಳಲ್ಲಿ ಯುಟುಬ್ ಗೆ ಅಪ್ಲೋಡ್ ಮಾಡಲಾಗುವುದು.
ದಿನಾಂಕ 15-07-2023 ರ ವರೆಗೆ ವೀಕ್ಷಿಸಿದ ವೀಕ್ಷಕರ ಆಧಾರದ ಮೇಲೆ ಬಹುಮಾನವನ್ನು ಘೋಷಿಸಲಾಗುವುದು(ಅಂದಿನ ದಿನ ಸಾಯಂಕಾಲ 6 ಗಂಟೆಗೆ).
18 ವರ್ಷ ಮೀರಿರಬಾರದು (ದಿನಾಂಕ: 18-02-2023 ಕ್ಕೆ 18 ವರ್ಷ ಆಗಿರಬಾರದು)
ಬದಲಾವಣೆ: ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವ ಮತ್ತು ಬಹುಮಾನ ಘೋಷಣಾ ದಿನಾಂಕವನ್ನು ಹಲವು ಶಿಕ್ಷಕರ ಕೋರಿಕೆ ಮೇರೆಗೆ ಬದಲಾವಣೆ ಮಾಡಲಾಗಿದೆ. ಭಾಷಣ ಸ್ಪರ್ಧೆಯಲ್ಲಿ ಭಾಗವಗಿಸುವ ಕೊನೆಯ ದಿನಾಂಕ : 15-05-2023 ರ ಬದಲು 01-07-2023 ಎಂದಾಗಿದೆ ಹಾಗೂ ಭಾಷಣ ಸ್ಪರ್ಧೆಯ ಬಹುಮಾನ ಘೋಷಣಾ ದಿನಾಂಕ: 15-06-23 ರ ಬದಲು 15-07-2023 ಎಂದಾಗಿದೆ. ಈ ಬದಲಾವಣೆಗೆ ಮುಖ್ಯ ಕಾರಣ ಶಾಲಾ ಪರೀಕ್ಷೆಗಳು ಮತ್ತು ರಜಾ ದಿನಗಳು ಸ್ಪರ್ಧಾ ಸಮಯದಲ್ಲಿ ಇದ್ದ ಕಾರಣ ಸಿಕ್ಷಕರು ಮಕ್ಕಳನ್ನು ಭಾಷಣ ಸ್ಪರ್ಧೆಯಲ್ಲಿ ತೊಡಗಿಸಲು ಸಾಧ್ಯವಾಗಿಲ್ಲ. ಹಾಗಾಗಿ ಶಾಲಾ ಶಿಕ್ಷಕರ ಕೋರಿಕೆಯ ಮೇರೆಗೆ ಈ ಬದಲಾವಣೆ ಮಾಡಲಾಗಿದೆ.
1. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಕೃಪೆಯಿಂದ ಬರೆದ "ಉಸಿರು" ಕಿರು ಪುಸ್ತಕವು ಆನ್ಲೈನ್ ನಲ್ಲಿ ಲಭ್ವವಿದೆ, ಅದನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಓದಿರಿ. ಮಣ್ಣು ಉಳಿಸಿ ಅಭಿಯಾನದ ಕುರಿತ ರೇಡಿಯೋ ಸಂದರ್ಶನದ ಆಡಿಯೋ ಯುಟುಬ್ ನಲ್ಲಿ ಲಭ್ಯವಿದೆ, ಅದನ್ನೂ ಕೂಡ ಕೇಳಿದ ನಂತರ ಭಾಷಣ ತಯಾರಿ ಮಾಡುವುದು.
2. ನಡೆದಾಡುವ ದೇವರಾದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನದ ಮಾತುಗಳು, ಗತಿಸಿಹೋದ ಹಲವು ಮಹಾನ್ ನಾಯಕರ ಮಾತುಗಳು ಹಾಗೂ ಕೆಲವು ಘಟನೆಗಳನ್ನು ಉಲ್ಲೇಖಿಸಿ ಭಾಷಣ ಮಾಡಬೇಕು.
3.ಮಣ್ಣು ಉಳಿಸಿ ಅಭಿಯಾನದ ವೆಬ್ಸೈಟ್ savesoil.org ನಲ್ಲಿಯ ಮಾಹಿತಿಯನ್ನು ಭಾಷಣದಲ್ಲಿ ಉಪಯಲಯೋಗಿಸಿ. ವಾಸ್ತವಿಕವಾಗಿ ರೈತರ ಹಾಗೂ ಇತರ ಸಾಮಾಜಿಕ ಸಮಸ್ಯೆಗಳ ಉಲ್ಲೇಖಿತ ಭಾಷಣ ಇರಬೇಕು.
4. ಭಾಷಣದಲ್ಲಿ ಯಾವುದೇ ವ್ಯಕ್ತಿಯ ತೇಜೊವಧೆ ಮಾಡಿರಬಾರದು ಹಾಗೂ ಯಾವುದೇ ರಾಜಕೀಯ ವ್ಯಕ್ತಿಯ ಹೆಸರು ಅಥವಾ ಪಕ್ಷದ ಹೆಸರನ್ನು ಬಳಕೆ ಮಾಡಬಾರದು. ಅಂತಹ ಭಾಷಣಗಳನ್ನು ಸ್ವೀಕರಿಸುವುದಿಲ್ಲ.
5. ಮುಂಬರುವ ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ ಹೇಗಿರಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಭಾಷಣ ಇರಬೇಕು.
6. ಭಾಷಣದಲ್ಲಿ ತಾವು ಭಾಗವಹಿಸುವುದು ಬಹಳ ಮುಖ್ಯ, ಆದ ಕಾರಣ ಭಾಷಣವನ್ನು ಜನರಿಗೆ ಮನಮುಟ್ಟುವಂತೆ ಓದಲೂ ಬಹುದು. ವಾಸ್ತವಿಕ ಸಮಸ್ಯೆಗಳನ್ನು ಹೆಚ್ಚು ಜನರಿಗೆ ಮನಮುಟ್ಟುವಂತೆ ತಿಳಿಸುವಿರಿ ಎಂಬುದಕ್ಕೆ ಆದ್ಯತೆ ಇರುವುದು.
ಅತೀ ಹೆಚ್ಚು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಲು ಪ್ರಜ್ಞಾವಂತ ಶಿಕ್ಷಕರು ಮತ್ತು ಪಾಲಕರಲ್ಲಿ ಕಳಕಳಿಯ ವಿನಂತಿ.
ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇದೊಂದು ವಿಶೇಷ ಅವಕಾಶ.
ಇಂದೇ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿರಿ.
ಅಭೀಃ ಫೌಂಡೇಶನ್, ವಿಜಯಪುರ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವಾಗ ಜಾತಿ, ಹಣ, ಮಾಂಸ ಹಾಗೂ ಸರಾಯಿ ಮೇಲುಗೈ ಸಾಧಿಸುವವೋ ಆಗ ರೈತ ವರ್ಗಕ್ಕೆ ಸೋಲುಂಟಾಗುವುದು. ಹಿಂದಿನ ಹಲವು ಚುನಾವಣೆಗಳಲ್ಲಿ ಈ ಅರ್ಥಹೀನ ವಿಷಯಗಳು ಮೇಲುಗೈ ಸಾಧಿಸುತ್ತಾ ಬಂದ ಕಾರಣ, ಇಂದು ಅತೀ ಹೆಚ್ಚು ಸಂಕಷ್ಟದಲ್ಲಿರುವುದು ರೈತ ವರ್ಗವಾಗಿದೆ. ಇದರ ಕುರಿತು ಆಳವಾಗಿ ಪ್ರಜ್ಞಾವಂತರು ಯೋಚಿಸಬೇಕಾಗಿದೆ. ರೈತರ ಖರ್ಚು ಹೆಚ್ಚಾಗಿ ಆದಾಯ ಕಡಿಮೆ ಬರುತ್ತಿದೆ. ಜಮೀನುಗಳಲ್ಲಿ ಕೆಲಸ ಮಾಡುವವರ ಕೊರತೆ ತೀವ್ರವಾಗಿ ಕಾಡುತ್ತಿದೆ. ಮಣ್ಣಿನ ಸತ್ವ ಕಡಿಮೆಯಾಗಿ ಕಳಪೆ ಮಟ್ಟದ ಆಹಾರ ಉತ್ಪಾದನೆ ಆಗುತ್ತಿದೆ. ಕಳಪೆ ಮಟ್ಟದ ಆಹಾರ ಸೇವನೆಯಿಂದ ಬಹು ಜನರು ಹಲವು ದೈಹಿಕ ಮತ್ತು ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಕಡಿಮೆಯಾಗುವ ಯಾವ ಭರವಸೆಗಳೂ ಕೂಡ ಇಂದು ಕಾಣುತ್ತಿಲ್ಲ. ಇಷ್ಟೆಲ್ಲ ರೈತರ ಸಮಸ್ಯೆಗಳು ಇದ್ದರೂ ಸಹ, ಈ ಬಾರಿಯ ವಿಧಾನಸಭಾ ಚುನಾವಣೆ ಪ್ರಚಾರದ ಸಮಯದಲ್ಲಿ ಒಂದು ಪ್ರತಿಶತ ಸಮಯವೂ ಕೂಡ ರೈತರ ಸಮಸ್ಯೆಗಳ ಕುರಿತು ಮಾತನಾಡಲು ಬಳಕೆಯಾಗಿಲ್ಲ. ಇದುವೇ ದೊಡ್ಡ ವಿಪರ್ಯಾಸ. ಹಾಗಾಗಿ, ಇದು ಖಂಡಿತ ರೈತ ವರ್ಗಕ್ಕೆ ಉಂಟಾದ ದೊಡ್ಡ ಸೋಲಾಗಿದೆ.
ಯಾವ ಆಧಾರದ ಮೇಲೆ ಚುನಾವಣೆಗಳು ಜರಗುವವೋ ಮುಂದೆ ಅದೇ ಆಧಾರದ ಮೇಲೆ ಚುನಾಯಿತ ಪಕ್ಷ ಆಡಳಿತ ನಡೆಸುವುದು. ಈಗಿನ ಚುನಾವಣಾ ಪ್ರಚಾರ ವಿಷಯಗಳನ್ನು ಅವಲೋಕಿಸಿದರೆ, ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಯಾವ ಭರವಸೆಗಳೂ ಉಳಿದಿಲ್ಲ. ಇಂದು ರೈತ ವರ್ಗ ಅತ್ಯಂತ ಸಂದಿಗ್ಧ ಪರಿಸ್ಥಿತಿಗೆ ಬಂದು ನಿಂತಿದೆ. ಈ ಸಮಯದಲ್ಲಿ ಪ್ರಜ್ಞಾವಂತ ರೈತರು ಮುಂದೆ ಬಂದು ರೈತ ಕುಲ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲೇಬೇಕಾಗಿದೆ. ಇಂಗ್ಲೆಂಡ್ ದೇಶದಲ್ಲಿ ಲಕ್ಷಾಂತರ ಮಕ್ಕಳು ತುತ್ತು ಅನ್ನಕ್ಕೂ ಕೂಡ ಪರದಾಡುವ ಪರಿಸ್ಥಿತಿ ಈಗಾಗಲೇ ನಿರ್ಮಾಣವಾದಂತೆ ನಮ್ಮ ದೇಶದಲ್ಲಿಯೂ ಕೂಡ ನಿರ್ಮಾಣವಾಗುವ ಸಾಧ್ಯತೆಯಿದೆ. ಇಂದೇ ನಾವು ಎಚ್ಚೆತ್ತುಕೊಂಡು ರೈತರ ಆದಾಯ ಹೆಚ್ಚಿಸುವ ಕಾನೂನನ್ನು ಜಾರಿಗೆ ತರುವ ಪ್ರಯತ್ನ ಮಾಡಬೇಕು. ಇದು ಇಂದಿನ ಅನಿವಾರ್ಯತೆಯಾಗಿದೆ. ಮುಂಬರುವ ಚುನಾವಣಾ ಪ್ರಚಾರದ ಸಮಯದಲ್ಲಿ ರೈತರ ಸಮಸ್ಯೆಗಳು ಹೆಚ್ಚು ಪ್ರಸ್ತಾಪವಾಗುವ ವಾತಾವರಣ ನಿರ್ಮಾಣ ಮಾಡುವ ಅವಶ್ಯಕತೆಯಿದೆ.
ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಕರ್ನಾಟಕ ರಾಜ್ಯದ 21 ಜಿಲ್ಲೆಗಳಲ್ಲಿ ಕೆಲವು ಪ್ರಜ್ಞಾವಂತ ರೈತರು ಮುಂದೆ ಬಂದು ಚುನಾವಣಾ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೆ ರೈತರ ಆದಾಯ ಹೆಚ್ಚಿಸುವ ಕಾನೂನು ಜಾರಿಗಾಗಿ ಮನವಿ ಪತ್ರ ಸಲ್ಲಿಸಿದರು. ಈ ರೈತರ ಪಕ್ಷಾತೀತ ನಡೆಯನ್ನು ಎಲ್ಲರೂ ಕೂಡ ಮೆಚ್ಚಬೇಕಾಗಿದೆ. ಅವರ ಹೆಜ್ಜೆಯಲ್ಲಿ ಹೆಜ್ಜೆ ಇಡುವ ಹಲವು ರೈತರನ್ನು ಇನ್ನು ಮುಂದೆ ಹುಡುಕಬೇಕಿದೆ.
ಈಗಾಗಲೇ ಮಣ್ಣು ನಾಶದ ಪರಿಣಾಮವಾಗಿ ಗುಣಮಟ್ಟ ಆಹಾರದ ಕೊರತೆಯಾಗಿ ಹಲವು ದೈಹಿಕ ಮತ್ತು ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಇದೇ ಕಾರಣಕ್ಕಾಗಿ, ಮಣ್ಣು ಉಳಿಸಿ ಅಭಿಯಾನವನ್ನು ಸದ್ಗುರು ಅವರು ಪ್ರಾರಂಭಿಸಿ 400 ಕೋಟಿ ಜನರ ಬೆಂಬಲ ಪಡೆದಿದ್ದಾರೆ. ಮಣ್ಣು ಉಳಿಸುವ ಜವಾಬ್ದಾರಿ ಇಂದು ರೈತರ ಮೇಲಿದೆ, ಆದರೆ ಅವರಿಗೆ ಮಣ್ಣು ಉಳಿಸಲು ಕೇವಲ ಉಪದೇಶ ಮಾಡಿದರೆ ಸಾಲದು. ಯಾರು ಒಳ್ಳೆಯ ಕೃಷಿ ಪದ್ಧತಿಗಳನ್ನು ಅನುಸರಿಸಿ ಮಣ್ಣಿನ ಸತ್ವ ಕಾಪಾಡುವರೋ ಅವರಿಗೆ ಸರ್ಕಾರ ದೊಡ್ಡ ಪ್ರಮಾಣದ ಪ್ರೋತ್ಸಾಹ ಧನ ನೀಡುವ ಕಾನೂನು ಜಾರಿಗೊಳಿಸುವ ಅವಶ್ಯಕತೆಯಿದೆ. ಈ ಉದ್ದೇಶವನ್ನು ಹೊಂದಿದ ಕಾನೂನನ್ನು ಈಗಾಗಲೇ ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಕಾನೂನು ಜಾರಿಗೊಳಿಸಲು ರಾಜ್ಯಾದ್ಯಂತ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳಿಗೆ ಮನವಿ ಪತ್ರ ಸಲ್ಲಿಸುವ ಪ್ರಯತ್ನ ಮಾಡಲಾಯಿತು. ಈ ಪ್ರಯತ್ನದಲ್ಲಿ ಕೈ ಜೋಡಿಸಿದ ಎಲ್ಲ ರೈತರಿಗೂ ತುಂಬು ಹೃದಯದ ಧನ್ಯವಾದಗಳು. ರೈತರಿಗೆ ಮಣ್ಣಿನಲ್ಲಿರುವ ಸಾವಯವ ಇಂಗಾಲದ ಪ್ರಮಾಣಕ್ಕೆ ಅನುಗುಣವಾಗಿ ಸರ್ಕಾರ ಪ್ರೋತ್ಸಾಹ ಧನ ನೀಡುವವರೆಗೆ ಈ ಅಭಿಯಾನ ಮುಂದುವರೆಯುವುದು. ಇನ್ನು ಮುಂದೆ "ನಾನು ರೈತ" ಎಂಬ ವಿಶೇಷ ಕಾರ್ಯಕ್ರಮದಡಿ ಸೋತ ಹಾಗೂ ಗೆದ್ದ ಎಲ್ಲ ಅಭ್ಯರ್ಥಿಗಳಿಗೆ ಮನವಿ ಪತ್ರ ಸಲ್ಲಿಸಿ ಅವರವರ ಮತಕ್ಷೇತ್ರದಲ್ಲಿ ಅವರನ್ನು ಜವಾಬ್ದಾರರನ್ನಾಗಿ ಮಾಡೋಣ ಬನ್ನಿ. ಇದು ಇಂದು ಆಗಲೇಬೇಕಾದ ಮೊದಲ ಕೆಲಸವಾಗಿದೆ, ನಿಮ್ಮ ಅಭಿಪ್ರಾಯ ತಿಳಿಸಿ.
https://docs.google.com/forms/d/1MRyAdJs_kJigZxoRCNCz274pANFPKaHlfQ4Ugv0md6A/edit