ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾಗುವ ನಾಯಕನ ನಡೆ ನುಡಿಗಳು ನಮ್ಮ ಮಕ್ಕಳ ಭವಿಷ್ಯವನ್ನು ಖಂಡಿತ ನಿರ್ಧರಿಸುತ್ತವೆ. ತಂದೆ ತಾಯಿಗಳು ಕೈ ಮುಗಿದು ಮಾತನಾಡಿಸುವ ನಾಯಕ ಹಲವು ಚಟಗಳಿಗೆ ದಾಸನಾಗಿದ್ದರೆ, ಅದನ್ನು ನೋಡುವ ಮಕ್ಕಳಿಗೆ ಆ ರೀತಿಯ ನಡೆ ಸಾಮಾನ್ಯವಾಗಿ ತೋರುತ್ತದೆ. ತಂದೆ ತಾಯಿಯಂದಿರು ಹಂತಹ ವ್ಯಕ್ತಿಯನ್ನು ಕೈ ಮುಗಿದು ಗೌರವಿಸುವಾಗ, ನಾವೇಕೆ ಆ ಚಟಗಳನ್ನು ಮಾಡಬಾರದು ಎಂಬ ಪ್ರಶ್ನೆ ಜನ್ಮ ತಾಳುವುದು ಸಾಮಾನ್ಯ.
ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಕೋನದಿಂದ ನಮ್ಮನ್ನಾಳುವ ನಾಯಕರ ನಡೆ ನುಡಿಗಳನ್ನು ಅವಲೋಕನೆ ಮಾಡಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸೂಕ್ತ ಸಮಯವೇ ಚುನಾವಣೆಯ ಸಮಯ.
🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
*ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ