ಮಂಗಳವಾರ, ಫೆಬ್ರವರಿ 21, 2023

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಮಾನದಂಡದ ಮೇಲೆ ಒಬ್ಬ ನಾಯಕನನ್ನು ಆಯ್ಕೆ ಮಾಡುತ್ತೇವೆ ಎಂಬುದು ನಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತದೆ.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾಗುವ ನಾಯಕನ ನಡೆ ನುಡಿಗಳು ನಮ್ಮ ಮಕ್ಕಳ ಭವಿಷ್ಯವನ್ನು ಖಂಡಿತ ನಿರ್ಧರಿಸುತ್ತವೆ. ತಂದೆ ತಾಯಿಗಳು ಕೈ ಮುಗಿದು ಮಾತನಾಡಿಸುವ ನಾಯಕ ಹಲವು ಚಟಗಳಿಗೆ ದಾಸನಾಗಿದ್ದರೆ, ಅದನ್ನು ನೋಡುವ ಮಕ್ಕಳಿಗೆ ಆ ರೀತಿಯ ನಡೆ ಸಾಮಾನ್ಯವಾಗಿ ತೋರುತ್ತದೆ. ತಂದೆ ತಾಯಿಯಂದಿರು ಹಂತಹ ವ್ಯಕ್ತಿಯನ್ನು ಕೈ ಮುಗಿದು ಗೌರವಿಸುವಾಗ, ನಾವೇಕೆ ಆ ಚಟಗಳನ್ನು ಮಾಡಬಾರದು ಎಂಬ ಪ್ರಶ್ನೆ ಜನ್ಮ‌ ತಾಳುವುದು ಸಾಮಾನ್ಯ. 

ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಕೋನದಿಂದ ನಮ್ಮನ್ನಾಳುವ ನಾಯಕರ ನಡೆ ನುಡಿಗಳನ್ನು ಅವಲೋಕನೆ‌ ಮಾಡಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸೂಕ್ತ ಸಮಯವೇ ಚುನಾವಣೆಯ ಸಮಯ.

🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ